ಗುತ್ತಿಗಾರು: ವೀರಾಂಜನೇಯ ಸ್ಪೋರ್ಟ್ಸ್ ಕ್ಲಬ್ ನ ನೂತನ ಪದಾಧಿಕಾರಿಗಳ ಆಯ್ಕೆ

ಗುತ್ತಿಗಾರು: ಇಲ್ಲಿನ ವೀರಾಂಜನೇಯ ಸ್ಪೋರ್ಟ್ಸ್ ಕ್ಲಬ್ ನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಗುತ್ತಿಗಾರಿನ ಪ. ವರ್ಗದ ಸಭಾಭವನದಲ್ಲಿ ಕ್ಲಬ್ ನ
ಸ್ಥಾಪಕಾಧ್ಯಕ್ಷರಾದ ಮಾಯಿಲಪ್ಪ ಕೊಂಬೆಟ್ಟು ಇವರ ಸಮ್ಮುಖದಲ್ಲಿ ನಡೆಯಿತು.

ಕ್ಲಬ್ ನ‌ ನೂತನ ಅಧ್ಯಕ್ಷರಾಗಿ ಮೋಹನ್ ದಾಸ್ ಶಿರಾಜೆ,
ಪ್ರಧಾನ ಕಾರ್ಯದರ್ಶಿಯಾಗಿ ನಿರಂತ್ ದೇವಶ್ಯ, ಕೋಶಾಧಿಕಾರಿಯಾಗಿ ವಿನೀತ್ ಮುತ್ಲಾಜೆ ಹಾಗೂ ನಿರ್ದೇಶಕರುಗಳಾಗಿ ಗಿರೀಶ್ ಪಾರೆಪ್ಪಾಡಿ, ಜಯಂತ ದೇವ, ನವೀನ್ ಕೊಪ್ಪಡ್ಕ, ಭರತ್ ಹುಲಿಕೆರೆ, ಚಂದ್ರಶೇಖರ
ಕಡೋಡಿ, ಶಿವಪ್ರಸಾದ್ ಚಣಿಲ, ಸುನಿಲ್ ಸಂಪ್ಯಾಡಿ, ಕುಲದೀಪ್ ಪೈಕ, ಅನಿಲ್ ಮೆಟ್ಟಿನಡ್ಕ ಇವರುಗಳನ್ನು ಆಯ್ಕೆ‌ ಮಾಡಲಾಯಿತು.