ಸುಳ್ಯ ಶಾರಧಾಂಭೋತ್ಸವ ಶೋಭಾಯಾತ್ರೆ ಪೋಲೀಸ್ ಠಾಣೆ ಬದಲೀ ಮಾರ್ಗ ಪ್ರಕಟಣೆ 

ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಘಟಕ ಸುಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶ್ರೀ ಶಾರದಾಂಭ ಸೇವಾ ಸಮಿತಿ ಸುಳ್ಯ ಕಸಬಾ ಗ್ರಾಮ, ಸುಳ್ಯ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ ರವರ ವತಿಯಿಂದ ದಿನಾಂಕ:07.10.2025 ರಂದು ಮಧ್ಯಾಹ್ನ 03:00 ಗಂಟೆಯಿಂದ ಶ್ರೀ ಶಾರದಾದೇವಿ ಮೂರ್ತಿಯ ಶೋಭಯಾತ್ರೆಯು 12 ಸ್ತಬ್ಧಚಿತ್ರಗಳೊಂದಿಗೆ ಶ್ರೀ ಚೆನ್ನಕೇಶವ ದೇವಸ್ಥಾನ ಬಳಿಯಿಂದ ಹೊರಟು ಕವಿಜಿ ಜಂಕ್ಷನ್ – ವಿವೇಕಾನಂದ ಸರ್ಕಲ್ – ಶ್ರೀ ರಾಮಪೇಟೆ ಜ್ಯೋತಿ ಸರ್ಕಲ್ -ಮೊಗರ್ಪಣೆ – ಹಳೇಗೇಟ್ ತಲುಪಿ ವಾಪಾಸ್ಸು ಶ್ರೀರಾಮಪೇಟೆ – ಕೆ.ಎಸ್.ಆರ್.ಟಿ.ಸಿ ಜಂಕ್ಷನ್ – ಗಾಂಧಿನಗರ – ವಿಷ್ಣು ಸರ್ಕಲ್ ತಲುಪಿ ಪುನಃ ವಾಪಾಸ್ಸು ಕಟ್ಟೆ ಜಂಕ್ಷನ್ – ರಥಬೀದಿ ಮಾರ್ಗವಾಗಿ ಅಜ್ಜಾವರ ಗ್ರಾಮದ ಕಾಂತಮಂಗಲ ಪಯಸ್ವಿನಿ ಹೂಳೆಯಲ್ಲಿ ವಿಸರ್ಜನೆ ನಡೆಯಲಿದ್ದು, ಈ ಸಮಯ ಸುಮಾರು 5000 ಜನರು ಸೇರುವ ನಿರೀಕ್ಷೆ ಇದ್ದು, ಸುಳ್ಯ ಪೇಟೆಯಲ್ಲಿ ಮಾಣಿ – ಮೈಸೂರು ರಾಷ್ಟ್ರೀಯ ಹದ್ದಾರಿ 275 ಹಾದು ಹೋಗಿದ್ದು, ಶೋಭಯಾತ್ರೆ ಸಮಯದಲ್ಲಿ ಸುಳ್ಯ ಪೇಟೆಯಲ್ಲಿ ವಾಹನದಟ್ಟಣೆ ಉಂಟಾಗಿ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗುವ ಸಾಧ್ಯತೆ ಇರುವುದರಿಂದ ವಾಹನಗಳ ಸುಗಮ ಸಂಚಾರಕ್ಕೆ ಬದಲಿ ಮಾರ್ಗವನ್ನು ಉಪಯೋಗಿಸುವ ಅವಶ್ಯಕತೆ ಇದ್ದು, ಮಡಿಕೇರಿಯಿಂದ ಸುಳ್ಯ – ಪುತ್ತೂರು -ಮಂಗಳೂರಿಗೆ ತೆರಳುವ ವಾಹನಗಳು ಪರಿವಾರಕಾನ ಉಬರಡ್ಕ ಮಿತ್ತೂರು ಕಂದಡ್ಕ- ಜಾಲ್ಕೂರು ಮಾರ್ಗವಾಗಿ ಪುತ್ತೂರು – ಮಂಗಳೂರು ತೆರಳುವಂತೆ ಹಾಗೂ ಮಂಗಳೂರಿನಿಂದ ಸುಳ್ಯ – ಮಡಿಕೇರಿ ಮಾರ್ಗವಾಗಿ ತೆರಳುವ ವಾಹನಗಳು ಜಾಲ್ಕೂರು ಗ್ರಾಮದ ಅಡ್ಕಾರು- ಪೇರಾಲು- ಅಜ್ಜಾವರ- ಕಾಂತಮಂಗಲ – ಕಟ್ಟೆ ಜಂಕ್ಷನ್ ಮಾರ್ಗವಾಗಿ ಮಡಿಕೇರಿ ತೆರಳುವಂತೆ ದಿನಾಂಕ:07.10.2025 ರ ಮಧ್ಯಾಹ್ನ 02:00 ಗಂಟೆಯಿಂದ ದಿನಾಂಕ:08.10.2025 ರ ಬೆಳಿಗ್ಗೆ 06:00 ಗಂಟೆಯವರೆಗೆ ವಾಹನ ಸಂಚಾರದ ಬಗ್ಗೆ, ಸದ್ರಿ ಬದಲಿ ಮಾರ್ಗವಾಗಿ ಚಲಿಸುವಂತೆ ಆದೇಶಿಸಬೇಕಾಗಿ ಕೋರಿ ಪೊಲೀಸ್ ಅಧೀಕ್ಷಕರು, ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು ಹಾಗೂ ಉಪವಿಭಾಗಾಧಿಕಾರಿಗಳು, ಪುತ್ತೂರು ಉಪವಿಭಾಗ, ಪುತ್ತೂರು ಇವರು ಉಲ್ಲೇಖದಂತೆ ಈ ಕಛೇರಿಗೆ ಪ್ರಸ್ತಾವನೆಯನ್ನು ಸಲ್ಲಿಸಿರುತ್ತಾರೆ.