ವಳಲಂಬೆ: ಆಶ್ಲೇಷ ಬಲಿ, ನಾಗರ ಪಂಚಮಿ ಆಚರಣೆ

ಗುತ್ತಿಗಾರು:ಜು.30. ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಜು.29 ರಂದು ನಾಗರ ಪಂಚಮಿ ಪ್ರಯುಕ್ತ ಹೋಮ ಸಹಿತ ಸಾಮೂಹಿಕ ಅಶ್ಲೇಷ ಬಲಿ ಪೂಜೆ ನಡೆಯಿತು.
ನಾಗ ದೇವರಿಗೆ ಕ್ಷೀರಾಭಿಷೇಕ, ಸೀಯಾಳ ಅಭಿಷೇಕ , ನಾಗತಂಬಿಲ ನಡೆಸಲಾಯಿತು. ಬಲಿವಾಡು ಕೂಟ, ಸಾಮೂಹಿಕ ಅಶ್ಲೇಷ ಬಲಿ ಪೂಜೆ ನಡೆಸಲಾಯಿತು.

ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮಿತ್ರದೇವ ಮಡಪ್ಪಾಡಿ, ಸದಸ್ಯರುಗಳಾದ ಕೇಶವ ಹೊಸೋಳಿಕೆ, ಸನತ್ ಮುಳುಗಾಡು, ಪುರುಷೋತ್ತಮ ಬಡಿಯಡ್ಕ, ಶಿವಪ್ರಸಾದ್ ರುದ್ರಚಾಮುಂಡಿ, ದಯಾನಂದ ಪಟ್ಟೆ, ಶಶಿಕಲಾ ಅಡ್ಡನಪಾರೆ, ಉಷಾ ಮಲ್ಕಜೆ , ಪ್ರಧಾನ ಅರ್ಚಕ ಪರಮೇಶ್ವರ ಭಟ್ ಹಾಗೂ ಉತ್ಸವ ಸಮಿತಿಯ ಪದಾಧಿಕಾರಿಗಳು, ಭಕ್ತಾದಿಗಳು ಭಾಗವಹಿಸಿದ್ದರು.