ನಡುಗಲ್ಲು: ಅಸೌಖ್ಯದಿಂದ ಯುವಕ ಸಾವು

ನಡುಗಲ್ಲು: ಇಲ್ಲಿನ ಕಲ್ಲಾಜೆ ಎಂಬಲ್ಲಿ ಯುವಕನೋರ್ವ ಅಸೌಖ್ಯದಿಂದ ಸಾವನ್ನಪ್ಪಿದ ಘಟನೆ ಸೆ.16ರ ತಡರಾತ್ರಿ ಸಂಭವಿಸಿದೆ. ಮೃತನನ್ನು ಕಲ್ಲಾಜೆ ನಿವಾಸಿ ಲಕ್ಷ್ಮಣಗೌಡರವರ ಪುತ್ರ ಲಿಖಿತ್ ಕಲ್ಲಾಜೆ(26) ಎಂದು ಗುರುತಿಸಲಾಗಿದೆ.

ಕಳೆದ ಕೆಲದಿನಗಳಿಂದ ಜ್ವರದಿಂದ ಬಳಲುತ್ತಿದ್ದ ಲಿಖಿತ್ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ. ಮೃತರು ತಂದೆ, ತಾಯಿ, ಸಹೋದರ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.