ಸುಳ್ಯ: ಅರೆಭಾಷೆ ಅಕಾಡೆಮಿ, ಲಯನ್ಸ್ ಕ್ಲಬ್ ವತಿಯಿಂದ ‘ಆಟಿ ವೈಭವ’ ಕಾರ್ಯಕ್ರಮ

ಸಮಗ್ರ ನ್ಯೂಸ್: ಕರ್ನಾಟಕ ಸರಕಾರ, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡಮಿ ಮಡಿಕೇರಿ ಹಾಗೂ ಲಯನ್ಸ್ ಕ್ಲಬ್ ಆಟಿ ಸಂಸ್ಕೃತಿ ನೆಂಪಿಸುವ ಆಟಿ ವೈಭವ ಕಾರ್ಯಕ್ರಮದ ಉದ್ಘಾಟನಾ ಸಮಾರಂಭವು ಆ.15 ರಂದು ಸುಳ್ಯದ ಲಯನ್ಸ್ ಕ್ಲಬ್ ನಲ್ಲಿ ನಡೆಯಿತು.

ಕಾರ್ಯಕ್ರಮವನ್ನು ದೀಪಬೆಳಗಿಸುವ ಮೂಲಕ ಲಯನ್ಸ್ ಚಂದ್ರಶೇಖರ ಕೆ. ಎಸ್ ಉದ್ಘಾಟಿಸಿದರು. ಲಯನ್ಸ್ ಕ್ಲಬ್ ನ ಅಧ್ಯಕ್ಷ ರಾಮಕೃಷ್ಣ ರೈ ಅಧ್ಯಕ್ಷತೆಯನ್ನು ವಹಿಸಿದ್ದರು.

ಈ ಸಂದರ್ಭದಲ್ಲಿ ಲಯನ್ ಗಂಗಾಧರ್ ರೈ, ವಲಯಧ್ಯಕ್ಷರು ಲಯನ್ ರೂಪಶ್ರೀ ಜೆ ರೈ, ಲಯನ್ ರಮೇಶ್ ಶೆಟ್ಟಿ ಲೋಕೇಶ್ ಊರುಬೈಲು ಹಾಗೂ ಲತಾ ಕುದ್ಪಾಜೆ ಉಪಸ್ಥಿತರಿದ್ದರು. ಜಯರಾಮ ದೆರಪ್ಪಜ್ಜನಮನೆ ಸ್ವಾಗತಿಸಿ, ಚಂದ್ರಾವತಿ ಬಡ್ಡಡ್ಕ ವಂದಿಸಿ, ಲಯನ್ ರೂಪಶ್ರೀ ಜೆ ರೈ ನಿರೂಪಿಸಿದರು.