ಕೊಲ್ಲಮೊಗ್ರು: ಇಲ್ಲಿನ ಸಮೀಪದ ಬಾಳುಗೋಡು ಗ್ರಾಮ ಕಟ್ಟೆಮನೆ ಶೈಲೇಶ್ ಎಂಬವರ ತೋಟಕ್ಕೆ ಮಾ.11ರ ರಾತ್ರಿ ಆನೆ ದಾಳಿ ಮಾಡಿ ಅಪಾರ ಪ್ರಮಾಣದ ತೆಂಗು,ಅಡಿಕೆ,ಬಾಳೆಗಿಡಗಳನ್ನು ಹಾನಿ ಮಾಡಿದ ಘಟನೆ ನಡೆದಿದೆ.
ಆನೆಯು ಬೆಂಡೋಡಿ, ಕಾಂತುಕುಮೇರಿ, ದೇವರುಳಿಯ, ಕಟ್ಟೆಮನೆ ಬಸವನಗುಡಿ ಈ ಭಾಗಗಳ ಹಲವು ಕೃಷಿ ತೋಟಗಳಲ್ಲಿ ಹಾನಿ ಮಾಡಿದ್ದು, ಹಲವು ದಿನಗಳಿಂದ ಇದೇ ಭಾಗದಲ್ಲಿ ಬೀಡುಬಿಟ್ಟಿದ್ದು ರೈತರು ಹಾಗು ರಸ್ತೆಯಲ್ಲಿ ಸಂಚಾರಿಸುವ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ. ಅರಣ್ಯ ಇಲಾಖೆ ಈ ಬಗ್ಗೆ ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕೆನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.