ಮಡಪ್ಪಾಡಿ – ಮರ್ಕಂಜ‌- ಸುಳ್ಯ ನೂತನ ಬಸ್ ಸಂಚಾರ ಆರಂಭ

ಗುತ್ತಿಗಾರು: ಮಡಪ್ಪಾಡಿಯಿಂದ ಬೆಳಿಗ್ಗೆ 7.00ಗಂಟೆಗೆ ಹೊರಟು ಮರ್ಕಂಜ – ದೊಡ್ಡತೋಟ ಮಾರ್ಗವಾಗಿ ಸುಳ್ಯಕ್ಕೆ ಸರ್ಕಾರಿ ಬಸ್ಸು ಸೇವೆ ಇಂದಿನಿಂದ(ಮಾ.3) ಪ್ರಾರಂಭವಾಗಿದೆ.

ಮಡಪ್ಪಾಡಿ ಗ್ರಾಮ ಪಂಚಾಯಿತಿ ಹಾಗೂ ಸುಳ್ಯ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯವರ ಮೂಲಕ ಮಾಡಿದ ಪ್ರಯತ್ನದ ಫಲವಾಗಿ ಇದೀಗ ಬಸ್ಸು ಸೇವೆಯನ್ನು , ಕರ್ನಾಟಕ ಸಾರಿಗೆ ಇಲಾಖೆ ಆರಂಭಿಸಿದೆ.

ಬಸ್ ಸೇವೆಗೆ ಮಡಪ್ಪಾಡಿ ಗ್ರಾ.ಪಂ‌ ಅಧ್ಯಕ್ಷೆ ಉಷಾ ಜಯರಾಮ ಚಾಲನೆ ನೀಡಿದ್ದು, ಈ ಸಂದರ್ಭದಲ್ಲಿ ಸುಳ್ಯ ತಾಲೂಕು ಗ್ಯಾರಂಟಿ ಯೋಜನೆಯ ಸಮಿತಿ ಸದಸ್ಯರುಗಳಾದ ಸೋಮಶೇಖರ ಕೇವಳ , ವಿಜೇಶ್ ಹಿರಿಯಡ್ಕ , ಮುಖಂಡರಾದ ಪಿ. ಸಿ.ಜಯರಾಮ , ಮಿತ್ರದೇವ ಮಡಪ್ಪಾಡಿ ಹಾಗೂ ಗ್ರಾಮಸ್ಥರಾದ ಯತೀಂದ್ರನಾಥ ಪಾಲ್ತಾಡು , ದಿನೇಶ್ ಕೊಡಪಾಲ , ವಾಸುದೇವ ನಡುಬೆಟ್ಟು , ಭೋಜರಾಜ ಪೈಲೂರು , ನಿತ್ಯಾನಂದ ಎನ್.ಟಿ, ಈಶ್ವರ ಬಳ್ಳಡ್ಕ , ಶ್ರೀಮತಿ ವಸಂತಿ ಕೊಡಪಾಲ, ಶ್ರೀಮತಿ ತೇಜಾವತಿ ಕೊಡಿಪಾಲ , ವಿನಯ ನಡುಬೆಟ್ಟು , ಬಾಲಕೃಷ್ಣ ನಡುಬೆಟ್ಟು , ಕುಸುಮಾಧರ ಕಡ್ಯ , ಧರ್ಮಪಾಲ ನಡುಬೆಟ್ಟು , ಜನಾರ್ಧನ ಬಳ್ಳಡ್ಕ ಮೊದಲಾದವರು ಉಪಸ್ಥಿತರಿದ್ದರು.