ಅಜ್ಜಾವರ: ಇಲ್ಲಿನ ಮೇನಾಲದಲ್ಲಿ ಸ್ಕೂಟಿಯಲ್ಲಿ ತೆರಳುತ್ತಿದ್ದ ಯುವಕನಿಗೆ ಕಾಡು ಹಂದಿ ಅಡ್ಡ ಬಂದು ಸ್ಕೂಟಿ ಪಲ್ಟಿಯಾಗಿ ಯುವಕ ಗಾಯಗೊಂಡ ಘಟನೆ ಗುರುವಾರ ಸಂಭವಿಸಿದೆ.
ಮೇನಾಲದಲ್ಲಿ ಫಾಸ್ಟ್ಫುಡ್ ನಡೆಸುತ್ತಿರುವ ಭಾಸ್ಕರ ಅವರು ಫೆ. 27ರಂದು ರಾತ್ರಿ ಸ್ಕೂಟಿಯಲ್ಲಿ ಹೋಗುತ್ತಿದ್ದಾಗ ರಬ್ಬರ್ ತೋಟದ ಒಳಗಿನಿಂದ ದೊಡ್ಡ ಗಾತ್ರದ ಹಂದಿಯೊಂದು ರಸ್ತೆಗೆ ಬಂದು ಸ್ಕೂಟಿಗೆ ಗುದ್ದಿದೆ.
ಪರಿಣಾಮ ಭಾಸ್ಕರ ಅವರಿಗೆ ಗಾಯವಾಗಿದೆ. ಅವರು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ.