ಕಾಸರಗೋಡು: ಟಿ.ಎಂ ಶಹೀದ್ ಕಾರು ಅಪಘಾತ

ಕಾಸರಗೋಡು: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಅರಂತೋಡು ನಿವಾಸಿ ಟಿ.ಎಂ.ಶಹೀದ್‌ ತೆಕ್ಕಿಲ್‌ ಅವರ ಕಾರು ಕಾಸರಗೋಡಿನಲ್ಲಿ ಸೋಮವಾರ ಅಪಘಾತಕ್ಕೀಡಾಗಿದ್ದು, ಶಹೀದ್‌ ಹಾಗೂ ಇತರರು ಅಪಾಯದಿಂದ ಪಾರಾಗಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್‌ ಪೆರಿಯ ಕಲೊÂàಟ್‌ನಲ್ಲಿ ಕೃಪೇಶ್‌ ಮತ್ತು ಶರತ್‌ಲಾಲ್‌ ಅವರ 6ನೇ ಪುಣ್ಯ ಸ್ಮರಣೆ ಕಾರ್ಯ ಕ್ರಮಕ್ಕೆ ಆಗಮಿಸಿದ್ದು, ಅವರ ಭಾಷಣವನ್ನು ಮಲಯಾಳಂಗೆ ಭಾಷಾಂತರಿಸಲು ಹೋಗುತ್ತಿದ್ದ ಇವರ ಕಾರಿಗೆ ಕಾಸರಗೋಡು ನಗರದ ಟ್ರಾಫಿಕ್‌ ಸಿಗ್ನಲ್‌ನಲ್ಲಿ ಹಿಂಬದಿಯಿಂದ ಬಂದ ಇವರ ಸಂಬಂಧಿಕರ ಫೋರ್ಚೂನ್‌ ಕಾರು ಢಿಕ್ಕಿ ಹೊಡೆದಿದೆ.