ಫೆ.16 ಬಿಳಿನೆಲೆ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ

ಗ್ರಾಮೀಣ ಮಟ್ಟಕ್ಕೂ ಬಂತು ಅಧುನಿಕ ಚುನಾವಣಾ ತಂತ್ರಗಾರಿಕ ತಂಡ

ಜಿಲ್ಲೆಯ ಹಲವು ಸಹಕಾರ ಸಂಘಗಳಿಗೆ ಚುನಾವಣೆ ನಡೆಯುತ್ತಿದ್ದು ಸಹಕಾರಿಗಳಿಗೆ ಚುನಾವಣಾ ಪರ್ವವಾಗಿದೆ . ಚುನಾವಣೆ ಎಂದ ಕೂಡಲೇ ಸಾಂಪ್ರದಾಯಿಕ ಶೈಲಿಯಲ್ಲಿ ಮನೆ ಮನೆ ಭೇಟಿಯ ಮತಪ್ರಚಾರ ಮಾಡುವುದು ಸಾಮನ್ಯವಾದರೇ ಬಿಳಿನೆಲೆ ಯ ರೈತಾಪಿ ಸಹಕಾರಿ ಅಭಿವೃದ್ಧಿ ರಂಗ ಚುನಾವಣೆಗೆ ಅಧುನಿಕ ತಂತ್ರಗಾರಿಕೆಯನ್ನು ಬಳಸಿಕೊಂಡು ವಿಭಿನ್ನವಾಗಿ ಪ್ರಚಾರ ನಡೆಸುತ್ತಿದ್ದು ಗ್ರಾಮಂತರದಲ್ಲಿ ಹೊಸತನವನ್ನು ಪರಿಚಯಿಸಿದ್ದಾರೆ.

ಸಹಕಾರ ಸಂಘದ ಸದಸ್ಯರಿಗೆ ಅಭ್ಯರ್ಥಿಗಳ ಧ್ವನಿಯಲ್ಲಿ ಏಕಕಾಲದಲ್ಲಿ ಕರೆ ಮಾಡಿ ಚುನಾವಣೆ ಗೆ ಸ್ಪರ್ಧಿಸುವ ಕುರಿತು ಹಿಂದಿನ ಆಡಳಿತ ಮಂಡಳಿಯ ಅವ್ಯವ್ಯಹಾರದ ಕುರಿತು ಸದಸ್ಯರಿಗೆ ಮನದಟ್ಟು ಮಾಡುವುದರ ಜತೆಗೆ ಮತ ಯಾಚಿಸುತ್ತಿದ್ದು ಜತೆಗೆ ರಾಜಕೀಯ ತಂತ್ರಗಾರಿಕೆ ತಂಡದ ವಾಟ್ಸಪ್ ಸಂದೇಶ ಗಳು ಸದಸ್ಯರ ಮೊಬೈಲ್ ಗಳಿಗೆ ಏಕಕಾಲದಲ್ಲಿ ಬರುವಂತೆ ಮಾಡಿ ಅಧುನಿಕ ತಂತ್ರಜ್ಞಾನ ಗಳನ್ನು ಬಳಸಿದ್ದು ಗ್ರಾಮಸ್ಥರಲ್ಲಿ ತಂತ್ರಜ್ಞಾನ ದ ಬಳಕೆ ಯ ಕುರಿತು ಹುಬ್ಬೇರಿಸಿದ್ದು ಅದುವೇ ಪ್ರಮುಖ ಚರ್ಚಾ ವಿಷಯ ಆಗಿದೆ.

ಈ ಬಗ್ಗೆ ಮಾತನಾಡಿರುವ ರೈತಾಪಿ ಸಹಕಾರಿ ಅಭಿವೃದ್ಧಿ ರಂಗ ದ ಸದಸ್ಯ “ಪ್ರದೀಪ್ ಕಳಿಗೆ”
” ಹಲವು ರಾಜಕೀಯ ಪಕ್ಷ ಗಳಿಗೆ ತಂತ್ರಗಾರಿಕೆ ಮಾಡಿರುವ ಸಂಸ್ಥೆಯ ಮುಖ್ಯಸ್ಥರು ನನ್ನ ಆತ್ಮೀಯ ಸ್ನೇಹಿತರು ನನಗೆ ಇದರ ಕುರಿತು ನಮಗೆ ಮಾಹಿತಿ ನೀಡಿದರು ಹಾಗು ಪ್ರಾಯೋಗಿಕವಾಗಿ ಉಚಿತವಾಗಿ ಮಾಡುವ ಬಗ್ಗೆ ತಿಳಿಸಿದರು , ಇದರ ಬಗ್ಗೆ ಚಿಂತಿಸಲಾಗಿ ಅಲ್ಪಾವಧಿಯ ಲ್ಲಿ ಎಲ್ಲ ಸದಸ್ಯರನ್ನು ಮುಖತಃ ಭೇಟಿ ಮಾಡುವುದು ಕಷ್ಟ ಸಾಧ್ಯ ಆಗಿರುವಾಗ ತಂತ್ರಜ್ಞಾನದ ಮುಖಾಂತರ ಕರೆ ಹಾಗೂ ಸಂದೇಶದ ಮುಖಾಂತರ ತಲುಪುವುದು ಹಾಗೂ ಪ್ರಸ್ಥುತ ತಂತ್ರಜ್ಞಾನ ಯುಗದಲ್ಲಿ ಸಾಂಪ್ರದಾಯಿಕವಲ್ಲದೆಯೂ ಪ್ರಚಾರ ಮಾಡಬಹುದು ಎಂಬ ಯೋಚನೆಯು ಬಂದ ಕಾರಣ ಇದನ್ನು ಮಾಡಲಾಯಿತು ನಮ್ಮ ಈ ಪ್ರಚಾರ ವನ್ನು ಎಲ್ಲಾರು ಆಶ್ಚರ್ಯ ದಿಂದ ನೋಡಿದ್ದು ಎಲ್ಲರನ್ನು ತಲುಪುವ ಭರವಸೆ ನಮಗಿದೆ ” ಎಂದರು.