ಸುಬ್ರಹ್ಮಣ್ಯ: ಗ್ರಾ.ಪಂ ಮಾಜಿ ಉಪಾಧ್ಯಕ್ಷ, ಸಾಮಾಜಿಕ ಧುರೀಣ ಬಾಲಕೃಷ್ಣ ಮರೀಲ್ ನಿಧನ

ಸುಬ್ರಹ್ಮಣ್ಯ: ಇಲ್ಲಿನ ಕುಲ್ಕುಂದ ನಿವಾಸಿ ಸುಬ್ರಹ್ಮಣ್ಯ ಗ್ರಾ.ಪಂ ಮಾಜಿ ಉಪಾಧ್ಯಕ್ಷ, ಸಾಮಾಜಿಕ, ಧಾರ್ಮಿಕ, ರಾಜಕೀಯ ಕ್ಷೇತ್ರದಲ್ಲಿ ಸೇವೆಗೈದಿರುವ ಕಾಂಗ್ರೆಸ್ ನಾಯಕ ಬಾಲಕೃಷ್ಣ ಮರೀಲ್
ಕೆಲಕಾಲದ ಅಸೌಖ್ಯತೆಯಿಂದ ಇಂದು(ಜ.11) ಬೆಳಗ್ಗೆ ನಿಧನರಾದರು. ಅವರಿಗೆ 90ವರ್ಷ ವಯಸ್ಸಾಗಿತ್ತು.

ಮೃತರು ಪತ್ನಿ, ಪುತ್ರ, ಇಬ್ಬರು, ಪುತ್ರಿಯರು, ಸೊಸೆ, ಮೊಮ್ಮಕ್ಕಳು, ಕುಟುಂಬಸ್ಥರು ಮತ್ತು ಬಂಧುಬಳಗವನ್ನು ಅಗಲಿದ್ದಾರೆ.