ಸುಳ್ಯ ನಗರ ಪಂಚಾಯತ್ ಸಭೆಯಲ್ಲಿ ಶಾಸಕರ ‘ತಾಕತ್’ ಪ್ರಶ್ನೆ| ಆಡಳಿತ, ವಿರೋಧ ಪಕ್ಷಗಳ ಸದಸ್ಯರ ನಡುವೆ ವಾಕ್ಸಮರ

ಸುಳ್ಯ: ಇಲ್ಲಿನ ನಗರ ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ (ನ.5ರಂದು ) ನಡೆದ ಸಾಮಾನ್ಯ ಸಭೆಯಲ್ಲಿ ಶಾಸಕರಿಂದ ಅನುದಾನ ತರಿಸುವ ಕುರಿತು ಗಂಭೀರ ಚರ್ಚೆ ನಡೆದು, ಆಡಳಿತ ಮತ್ತು ವಿರೋಧ ಪಕ್ಷಗಳ ಸದಸ್ಯರ ನಡುವೆ ಮಾತಿನ ಸಮರ ನಡೆಯಿತು.

ಈ ನಡೆದ ಚರ್ಚೆಯಲ್ಲಿ ಶಾಸಕರ ‘ತಾಕತ್’. ಕುರಿತು ಮಾತು ಪ್ರಸ್ತಾಪವಾಗಿ ಈ ಮಾತಿಗೆ ಆಡಳಿತ ಪಕ್ಷದ ಸದಸ್ಯರು ಆಕ್ಷೇಪ ವ್ಯಕ್ತ ಪಡಿಸಿದ ಪ್ರಸಂಗವೂ ನಡೆದಿದೆ.

ಸಭೆಯಲ್ಲಿ ನಾಮ ನಿರ್ದೇಶಕ ಸದಸ್ಯ ಸಿದ್ದೀಕ್ ಕೊಕ್ಕೊ ರವರು “ಪುತ್ತೂರಿನ ಶಾಸಕರು ಒಳ್ಳೆಯ ಅನುದಾನ ತರಿಸುತ್ತಾರೆ, ನಮ್ಮ ಶಾಸಕರಿಂದ ಏಕೆ ಆಗುತ್ತಿಲ್ಲ, ಅವರಿಗೆ ‘ತಾಕತ್’ ಇಲ್ಲವೇ?” ಎಂದು ಕೇಳಿದರು. ಇದಕ್ಕೆ ಆಕ್ರೋಶ ವ್ಯಕ್ತ ಪಡಿಸಿದ ಸದಸ್ಯ ವಿನಯ್ ಕುಮಾರ್ ಕಂದಡ್ಕರವರು, “ಈ ಮಾತು ಸರಿಯಲ್ಲ, ನಮ್ಮ ಶಾಸಕರ ‘ತಾಕತ್’ ಬಗ್ಗೆ ಕೇಳಲು ನೀವು ಯಾರು? ಕೂಡಲೇ ಈ ಮಾತನ್ನು ಹಿಂಪಡೆಯಬೇಕು” ಎಂದು ಪಟ್ಟು ಹಿಡಿದರು.

ಇದಕ್ಕೆ ಪೂರಕವಾಗಿ ಬಿಜೆಪಿ ಯ ಎಲ್ಲಾ ಸದಸ್ಯರುಗಳು ಮತ್ತು ಅಧ್ಯಕ್ಷರು ನಾಮ ನಿರ್ದೇಶಕ ಸದಸ್ಯರ ಮಾತಿಗೆ ಖಂಡನೆ ವ್ಯಕ್ತಪಡಿಸಿದರು. ಬಳಿಕ ಸದಸ್ಯರಾದ ಉಮ್ಮರ್ ಕೆ ಎಸ್, ವೆಂಕಪ್ಪ ಗೌಡ, ಮಧ್ಯ ಪ್ರವೇಶಿಸಿ ಸಮಾಧಾನ ಪಡಿಸಿದರು.