ಐವರ್ನಾಡು: ಗೆಳೆಯರ ಬಳಗ ಮತ್ತು ಸಾರ್ವಜನಿಕರಿಂದ ದೇವಸ್ಥಾನ ಮುಂಭಾಗದ ರಸ್ತೆ ಕಾಂಕ್ರೀಟ್

ಐವರ್ನಾಡು:ಗೆಳೆಯರ ಬಳಗ ದೇರಾಜೆ ಮತ್ತು ಸಾರ್ವಜನಿಕರು ಸೇರಿ ದೇವಸ್ಥಾನ ಮುಂಭಾಗದ ರಸ್ತೆಯನ್ನು ಕಾಂಕ್ರೀಟ್ ಕರಣಗೊಳಿಸಿದ್ದಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಐವರ್ನಾಡು ಗ್ರಾಮದ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಮುಂಭಾಗ ರಸ್ತೆ ಕೆಟ್ಟು ಹೋಗಿ ವಾಹನ ಸಂಚಾರಕ್ಕೆ ತೊಂದರೆ ಉಂಟಾಗುತ್ತಿತ್ತು.

ಈ ಹಿನ್ನೆಲೆಯಲ್ಲಿ ಅನೇಕ ಬಾರಿ ಸ್ಥಳೀಯ ಜನಪ್ರತಿನಿಧಿಗಳ ಗಮನ ಸೆಳೆದರೂ ರಸ್ತೆ ದುರಸ್ತಿಯಾಗದೆ ಉಳಿದಿತ್ತು. ಇದೀಗ ಗೆಳೆಯರ ಬಳಗ ದೇರಾಜೆ ಮತ್ತು ಸಾರ್ವಜನಿಕರು ಸೇರಿ ದೇವಸ್ಥಾನ ಮುಂಭಾಗದ ರಸ್ತೆಯನ್ನು ಕಾಂಕ್ರೀಟ್ ಕರಣಗೊಳಿಸಿದ್ದಾರೆ.