ಹಾಲೆಮಜಲು: ಗುತ್ತಿಗಾರು ಗ್ರಾಮ ಪಂಚಾಯತಿ ವ್ಯಾಪ್ತಿಯ ನಾಲ್ಕುೂರು ಗ್ರಾಮದ ಹಾಲೆಮ ಜಲಿನಲ್ಲಿರುವ ಬಸ್ಸು ತಂಗುದಾಣದ ಪುಸ್ತಕ ಗೂಡಿಗೆ ಕರ್ನಾಟಕ ಅರೆ ಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಕೊಡ ಮಾಡುವ ವಿವಿಧ ಸಾಹಿತಿಗಳು ಬರಹಗಾರರು ಬರೆದಿರುವ ಅರೆಬಾಷೆಯ ಕವನ ಸಂಕಲನ, ಅರೆ ಭಾಷೆ ಲಿಪಿ, ವ್ಯಾಕರಣ ಸೇರಿದಂತೆ ಇನ್ನಿತರ ಸಾಹಿತ್ಯ ಕಥೆಗಳಿರುವ ಪುಸ್ತಕಗಳನ್ನು ಮಡಿಕೇರಿ ದಸರಾ ಸಂದರ್ಭದಲ್ಲಿ ಅಕಾಡೆಮಿಯ ಅಧ್ಯಕ್ಷ ಸದಾನಂದ ಮಾವಜಿಯವರು ಪುಸ್ತಕ ಗೂಡಿನ ನಿರ್ವಾಹಕ ಅರೆ ಭಾಷೆ ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯ ದಿನೇಶ್ ಹಾಲೆಮಜಲುರವರಿಗೆ ನೀಡಿದರು.
ಈ ಸಂದರ್ಭದಲ್ಲಿ ಅಕಾಡೆಮಿ ಸದಸ್ಯ ಜ್ಞಾನೇಶ್ ನಿಡೃಮಲೆ, ವಿನೋದ್ ಮುಡಗದ್ದೆ, ಮಾಜಿ ಸದಸ್ಯ ಹಾಗೂ ಸಾಹಿತಿ ಎ.ಕೆ.ಹಿಮಕರ , ರಿಜಿಸ್ಟರ್ ಚಿನ್ನಸ್ವಾಮಿ ಸಿಬ್ಬಂದಿಗಳಾದ ಜ್ಯೋತಿ ಹಾಗೂ ಶೋಭಾ ಉಪಸ್ಥಿತರಿದ್ದರು.