ಬೆಳ್ಳಾರೆ: . ಶಿವರಾಮ ಕಾರಂತ ಕಾಲೇಜು ಬೆಳ್ಳಾರೆಯಲ್ಲಿ ಸ್ವಾಸ್ಥ ಸಂಕಲ್ಪ ಕಾರ್ಯಕ್ರಮ

ಬೆಳ್ಳಾರೆ:ಬೆಳ್ಳಾರೆ ವಲಯ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ ಮತ್ತು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ( ರಿ ) ಇದರ ಸಂಯುಕ್ತ ಆಶ್ರಯದಲ್ಲಿ ಪರಮಪೂಜ್ಯ ಡಾ. ಡಿ.ವೀರೇಂದ್ರ ಹೆಗ್ಗಡೆಯವರ ಮತ್ತು ಮಾತೃಶ್ರೀ ಡಾ. ಹೇಮಾವತಿ ಅಮ್ಮನವರ ಆಶೀರ್ವಾದಗಳೊಂದಿಗೆ ಸೆ.27ರಂದು ಡಾ. ಶಿವರಾಮ ಕಾರಂತ ಕಾಲೇಜು ಬೆಳ್ಳಾರೆಯಲ್ಲಿ ಸ್ವಾಸ್ಥ ಸಂಕಲ್ಪ ಕಾರ್ಯಕ್ರಮವನ್ನು ಸುಳ್ಯ ತಾಲೂಕು ಯೋಜನಾಧಿಕಾರಿ ಮಾಧವ ಗೌಡ ಅವರ ನೇತೃತ್ದಲ್ಲಿ ಉದ್ಘಾಟನೆ ಮಾಡಲಾಯಿತು.

ಮುಖ್ಯ ಅತಿಥಿಯಾಗಿ ಮಾದವ ಗೌಡ ರವರು ಸ್ವಾಸ್ಥ ಸಂಕಲ್ಪದ ಬಗ್ಗೆ ಕಾಲೇಜು ವಿದ್ಯಾರ್ಥಿಗಳಿಗೆ ಹದಿ ಹರೆಯದ ಲ್ಲಿ ದಾರಿ ತಪ್ಪುವ ದುಶ್ಚಟ ದುರಭ್ಯಾಸ ಗಳಿಂದ ಆಗುವ ದುಷ್ಪರಿಣಾಮ ಗಳ ಮಧ್ಯಪಾನ ಧೂಮಪಾನ ಡ್ರಗ್ಸ್ ಗಳು ಯಾವುದೆಲ್ಲ ದೇಹ ವನ್ನು ನಾಶ ಗೊಳಿಸುವ ಬಗ್ಗೇವಿವರವಾಗೀ ಮನ ಮುಟ್ಟುವ ರೀತಿಯಲ್ಲಿ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಡಾ. ಶಿವರಾಮ ಕಾರಂತ ಕಾಲೇಜಿನ ಪ್ರಾಂಶುಪಾಲ ಜ್ಯೋತಿ ಯಸ್., ಬೆಳ್ಳಾರೆ ಜನಜಾಗೃತಿ ವೇದಿಕೆ ಅಧ್ಯಕ್ಷ ಆನಂದ ಗೌಡ ಪೆರಿಯಣ, ಪ್ರಗತಿ ಬಂದು ಸ್ವ ಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷೆ ವೇದ ಎಚ್. ಶೆಟ್ಟಿ, ಸಂಚಾಲಕ ಡಾ. ರಾಮಚಂದ್ರ ಕೆ. lQAC. ಗಿರೀಶ್ ಸಿ.ಆರ್., ಯೋಜನಾಧಿಕಾರಿಗಳು, N S S ಘಟಕದವರು, ಪೆರುವಾಜೆ ಪ್ರಗತಿ ಬಂದು ಸ್ವ ಸಹಾಯ ಸಂಘಗಳ ಒಕ್ಕೂಟ ಅಧ್ಯಕ್ಷ ಸುಂದರ ನಾಯ್ಕ, ಸೇವಾ ಪ್ರತಿನಿದಿ ಹರೀನಾಕ್ಷಿ, ಉಷಾ, ಪೆರುವಾಜೆ ಒಕ್ಕೂಟದ ಉಪಾಧ್ಯಕ್ಷರು ಮತ್ತು ಕಾಲೇಜಿನ ಉಪನ್ಯಾಸಕರು ಸಿಬ್ಬಂದಿವರ್ಗ ಉಪಸ್ಥಿತರಿದ್ದರು.

ಕಾಲೇಜಿನ ವಿದ್ಯಾರ್ಥಿ ಶ್ರಾವ್ಯ ಕಾರ್ಯಕ್ರಮ ನಿರೂಪಿಸಿ, ವಲಯ ಮೇಲ್ವಿಚಾರಕಿ ವಿಶಾಲ ಸ್ವಾಗತಿಸಿ, ವಿನ್ಯಾಸ್ ವಂದಿಸಿದರು. ವಿದ್ಯಾರ್ಥಿಗಳಾದ ಸ್ನೇಹ ಮತ್ತು ಚರಣ್ ಅವರು ಕಾರ್ಯಕ್ರಮದ ಅನಿಸಿಕೆ ವ್ಯಕ್ತ ಪಡಿಸಿದರು. ಡ್ರಗ್ಸ್ ನಿಂದ ಆಗುವ ದುಷ್ಪಪರಿಣಾಮದ ಬಗ್ಗೇ ” ನಶೆಯೆಂಬ ನರಕ ” ಕಿರು ಚಿತ್ರ ವೀಕ್ಷಣೆ ಮಾಡಲಾಯಿತು.