ಎಲಿಮಲೆ: ಇಲ್ಲಿನ ಜುಮ್ಮಾ ಮಸೀದಿ ವಠಾರಕ್ಕೆ ಆ. 22 ರಂದು ರಾತ್ರಿ ಇಬ್ಬರು ವ್ಯಕ್ತಿಗಳು ಬಂದು ವಿದ್ಯಾರ್ಥಿಗಳಿಗೆ ಬೆದರಿಕೆ ಒಡ್ಡಿ ಹೋಗಿದ್ದಾರೆಂದು ಮಸೀದಿ ಕಮಿಟಿಯವರು ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ದೂರು ನೀಡಿರುವುದಾಗಿ ತಿಳಿದು ಬಂದಿದೆ.
ಎಲಿಮಲೆ ಜುಮ್ಮಾ ಮಸೀದಿಗೆ ಆ.22ರ ರಾತ್ರಿ ಸುಮಾರು 11 ಘಂಟೆಗೆ ಬಂದ ಸತೀಶ ಗುಡ್ಡನಮನೆ ಹಾಗೂ ಮತ್ತೋರ್ವ ಮಸೀದಿಯ ಆವರಣದಲ್ಲಿ ನಿಂತು ಜೋರಾದ ಬೈದು ಬೆದರಿಕೆ ಹಾಕಿರುವುದಾಗಿ ಪೋಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
ಎರಡು ದಿನ ಮೊದಲು ಮಸೀದಿಯ ವಿದ್ಯಾರ್ಥಿಗಳು ಶಾಲೆಗೆ ಹೋಗುವ ವೇಳೆ ರಸ್ತೆಯಲ್ಲಿ ಇಬ್ಬರು ಅಡ್ಡಗಟ್ಟಿ ನೀವು ಈ ರೀತಿಯ ಟೋಪಿಗಳನ್ನು ಧರಿಸಿ ಶಾಲೆಗೆ ಹೋಗಬಾರದು ಎಂದು ಹೆದರಿಸಿದ್ದರು ಎಂದೂ ಸುಬ್ರಮಣ್ಯ ಪೋಲೀಸರಿಗೆ ನೀಡಲಾದ ದೂರಿನಲ್ಲಿ ತಿಳಿಸಲಾಗಿದೆ.
ಈ ಘಟನೆಗೆ ಸಂಬಂಧಿಸಿ ಇಂದು ಸುಬ್ರಮಣ್ಯ ಎಸ್.ಐ. ಕಾರ್ತಿಕ್, ಪುತ್ತೂರು ಡಿ ವೈ ಎಸ್ ಪಿ ಹಾಗೂ ಇತರ ಅಧಿಕಾರಿಗಳು ಮಸೀದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.